Posts

Showing posts from June, 2023

ರಕ್ತದಾನ ಜೀವದಾನ : ಎಸ್. ಜಯಕರ್ ಶೆಟ್ಟಿ,

Image
 ರಕ್ತದಾನ ಜೀವದಾನ  : ಎಸ್. ಜಯಕರ್ ಶೆಟ್ಟಿ ಕುಂದಾಪುರ : "ರಕ್ತದಾನವೆಂದರೆ ಜೀವದಾನ ಮಾಡಿದ ಹಾಗೆ... ಬೇರೆಲ್ಲಾ ದಾನಕ್ಕಿಂತ ಶ್ರೇಷ್ಠವಾದ ದಾನವೆಂದರೆ ಅದು ರಕ್ತದಾನ "ಎಂದು ಎಸ್. ಜಯಕರ್ ಶೆಟ್ಟಿ, ಸಭಾಪತಿ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಇವರು ಹೇಳಿದರು.      ಅವರು ಇಲ್ಲಿನ ಭಂಡಾರಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು ಕುಂದಾಪುರ ಮತ್ತು ಭಾರತೀಯ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ  ಶಾಖೆ ಇವರ ಜಂಟಿ ಆಶ್ರಯದಲ್ಲಿ  ಆಯೋಜಿಸಿದ್ದ ವಿಶ್ವ ರಕ್ತದಾನಿಗಳ ದಿನಾಚರಣೆ ಕಾರ್ಯಕ್ರಮಕ್ಕೆ ಅಧ್ಯಕ್ಷರಾಗಿ ಭಾಗವಹಿಸಿ ಮಾತನಾಡಿದರು.    ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಮುಂದೆ ಬಂದು ರಕ್ತದಾನ ಮಾಡಿ ಜೀವ ಉಳಿಸುವ ಕಾರ್ಯದಲ್ಲಿ ಕೈಜೋಡಿಸಬೇಕು ರಕ್ತದಾನದ ಮಹತ್ವವನ್ನು ಅರಿಯಬೇಕು ಎಂದು ಕರೆ ನೀಡಿದರು.      ಈ ಸಂದರ್ಭದಲ್ಲಿ ವಿವಿಧ ಕಾಲೇಜಿನ ರೆಡ್ ಕ್ರಾಸ್ ಸಂಘಟಿಗರನ್ನು ಮತ್ತು ಹತ್ತು ಹಲವು ಬಾರಿ ರಕ್ತದಾನ ಮಾಡಿದ ರಕ್ತದಾನಿಗಳ್ಳನ್ನ ಸನ್ಮಾನಿಸಲಾಯಿತು.      ಎನ್ ಪಿ ನಾರಾಯಣ್ ಶೆಟ್ಟಿ, ಪದವಿ ಪ್ರಾಂಶುಪಾಲರು ಭಂಡಾರಕಾರ್ಸ್ ಕಾಲೇಜು ಕುಂದಾಪುರ ಇವರು ಕಾರ್ಯಕ್ರಮವನ್ನ ಉದ್ಘಾಟನೆ ಮಾಡಿದರು.      ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಡಾ.ಶುಭಕರ ಆಚಾರಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಭಂಡಾರಕಾರ್ಸ್ ಕಾಲೇಜು ಕುಂದಾಪುರ, ಶಿವರಾಮ ಶೆಟ್ಟಿ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ,  ಸತ್ಯನಾರಾಯಣ ಕಾರ್ಯಕ್ರಮ ಸಂಯೋಜಕರು

ಕಾಲೇಜಿನಲ್ಲಿ ಬಹುಮಾನ ವಿತರಣಾ ಕಾರ್ಯಕ್ರಮ

Image
  ಕಾಲೇಜಿ ನಲ್ಲಿ ಬಹುಮಾನ ವಿತರಣಾ ಕಾರ್ಯಕ್ರಮ ಕುಂದಾಪುರ : ಜೂ 14ರಂದು  ಇಲ್ಲಿನ ಭಂಡಾರ್ಕಾರ್ಸ್  ಕಾಲೇಜಿ ನಲ್ಲಿ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ಉಡುಪಿಯ ಪೂರ್ಣ ಪ್ರಜ್ಞಾ ಕಾಲೇಜಿನ ಪ್ರಾಂಶುಪಾಲರಾದ  ಡಾ.ಎ ರಾಘವೇಂದ್ರ ಅವರು ಮಾತನಾಡಿ, ಪದವಿ ಜೀವನವು ಬಹು ಮುಖ್ಯವಾದದು ವಿದ್ಯಾರ್ಥಿಗಳಿಗೆ ಅಮೂಲ್ಯವಾದದು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ದೊರೆಯುವ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಸಮಯವನ್ನು ದುರುಪಯೋಗ ಮಾಡದೆ ಪಠ್ಯತರ ಚಟುವಟಿಕೆಯ ಜೊತೆಯಲ್ಲಿ ಸೃಜನಶೀಲ  ಚಟುವಟಿಕೆಯನ್ನು ಅಳವಡಿಸಿಕೊಳ್ಳಬೇಕು. ಬರುವಂತಹ ಎಲ್ಲಾ ಅವಕಾಶಗಳನ್ನು ಉಪಯೋಗಿಸಿಕೊಂಡು ಭವಿಷ್ಯದಲ್ಲಿ ಬೆಳೆದು ಸಾಧನ ಮಾಡುವತ್ತ  ನಿಮ್ಮ ಪ್ರಯತ್ನವಿರಬೇಕು ಎಂದು ಹೇಳಿದರು.  ಸ್ಪೋರ್ಟ್ಸ್ ಕ್ಲಬ್ ಬ್ರಹ್ಮಾವರ ಇದರ ಅಧ್ಯಕ್ಷರಾದ ಎಂ, ಚಂದ್ರಶೇಖರ್ ಹೆಗಡೆ ಅವರನ್ನು ಕಾಲೇಜಿನಿಂದ ಸನ್ಮಾನಿಸಲಾಯಿತು. ಕಾಲೇಜಿನ ವಿಶ್ವಸ್ಥ ಮಂಡಳಿಯ ಹಿರಿಯ ಸದಸ್ಯರಾದ  ಕೆ. ಶಾಂತರಾಮ್ ಪ್ರಭು  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್. ಪಿ ನಾರಾಯಣ ಶೆಟ್ಟಿ,  ಭಂಡಾರಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ. ಎಂ. ಗೊಂಡ ರವರು ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ   ಶುಭಕರ ಆಚಾರಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.  ಕಾಲೇಜಿನ ಇಂಗ್ಲಿಷ್ ವಿಭಾಗದ ಉಪನ್ಯಾಸಕಿ ರೋಹಿಣಿ ಹೆಚ್.ಬಿ

First P.U Induction programme

Image
¥ÀæxÀªÀÄ ¥ÀzÀ« ¥ÀƪÀð «zÁåyðUÀ¼À ¥ÀjZÀAiÀÄ PÁAiÀÄðPÀæªÀÄ ¸ÁzsÀåvÉ ªÀÄvÀÄÛ CªÀPÁ±ÀUÀ¼ÀÄ «zÁåyðUÀ¼À ªÀåQÛvÀéªÀ£ÀÄß gÀƦ¸ÀĪÀ C¸ÀÛçUÀ¼ÀÄ:  GzÀå«Ä C©ü£ÀAzÀ£À ±ÉnÖ. PÀÄAzÁ¥ÀÄgÀ: EwÛÃZÉUÉ E°è£À   ¨sÀAqÁgïPÁgïì ¥ÀzÀ« ¥ÀƪÀð PÁ¯ÉÃf£À «zÁåyðUÀ½UÁV ¥ÀƪÀð ¥ÀjZÀAiÀÄ PÁAiÀÄð PÀæªÀĪÀ£ÀÄß £ÀqɬÄvÀÄ.   ¸ÁzsÀåvÉUÀ¼ÀÄ CªÀPÁ±ÀUÀ¼ÀÄ «zÁåyðUÀ¼À ªÀåQÛvÀéªÀ£ÀÄß §zÀ¯Á¬Ä¸ÀÄvÀÛzÉ. EzÀgÀ ¸ÀzÀÄ¥ÀAiÉÆÃUÀªÀ£ÀÄß J¯Áè «zÁåyðUÀ¼ÀÄ vÀªÀÄä «zÁåyð fêÀ£ÀzÀ°è G¥ÀAiÉÆÃV¹PÉƼÀî¨ÉÃPÀÄ JAzÀÄ PÁ¯ÉÃf£À £ÀÆvÀ£À «±Àé¸ÀÜgÁzÀ ²æà C©ü£ÀAzÀ£À ±ÉnÖ «zÁåyðUÀ¼À£ÀÄß GzÉÝò¹ ªÀiÁvÀ£ÁrzÀgÀÄ. «±Àé¸ÀÜ ªÀÄAqÀ½AiÀÄ »jAiÀÄ ¸ÀzÀ¸ÀågÁzÀ PÉ. ±ÁAvÁgÁªÀÄ ¥Àæ¨sÀÄ PÁAiÀÄðPÀæªÀÄzÀ CzsÀåPÀëvÉAiÀÄ£ÀÄß ªÀ»¹ «zÁåyðUÀ½UÉ ±ÀĨsÀ ºÁgÉʹzÀgÀÄ. «±Àé¸ÀÜ ªÀÄAqÀ½AiÀÄ ¸ÀzÀ¸ÀågÁzÀ ¸ÀzÁ£ÀAzÀ bÁvÀæ «zÁåyðUÀ¼À£ÀÄßzÉÝò¹ ªÀiÁvÀ£ÁrzÀgÀÄ. «±Àé¸ÀÜgÁzÀ gÁeÉÃAzÀæ vÉÆüÁgï «zÁåyðUÀ½UÉ ±ÀĨsÀ ºÁgÉʹzÀgÀÄ. ¥ÁæA±ÀÄ¥Á®gÁzÀ qÁ. f.JA.UÉÆAqÀgÀªÀgÀÄ ¥Áæ¸ÁÛ«PÀ ªÀiÁvÀ£Ár PÁ¯ÉÃf£À ¤Ãw ¤AiÀĪÀÄUÀ¼À ¸ÀA¥ÀÆtð ªÀiÁ»wAiÀÄ£ÀÄß ¤ÃrzÀgÀÄ.   G¥À£Áå¸ÀPÀgÁzÀ qÁ. ¸ÀgÉÆÃd JA. ¸ÁéUÀw¹zÀ

ವಿದ್ಯಾರ್ಥಿಗಳು ಸೋಲನ್ನು ಎದುರಿಸಲು ತಮಗೆ ತಾವೆ ತಯಾರಾಗಬೇಕು: ಡಾ.ಪಿ.ವಿ.ಭಂಡಾರಿ

Image
  ವಿದ್ಯಾರ್ಥಿಗಳು ಸೋಲನ್ನು ಎದುರಿಸಲು ತಮಗೆ ತಾವೆ ತಯಾರಾಗಬೇಕು: ಡಾ.ಪಿ.ವಿ.ಭಂಡಾರಿ ಕುಂದಾಪುರ: ಕಾಲೇಜು ವಿದ್ಯಾರ್ಥಿಗಳು  ಹರೆಯವು ಅಲ್ಲದ ವಯಸ್ಕರು ಅಲ್ಲದ ವಯಸ್ಸಿನವರು. ಈ ವಿಚಿತ್ರ ವಯಸ್ಸಿನಲ್ಲಿ ಬರುವಂತಹ ಸಮಸ್ಯೆಗಳನ್ನು ಮತ್ತು ಸೋಲನ್ನು ಎದುರಿಸಲು ತಮಗೆ ತಾವೆ ತಯಾರಾಗಬೇಕು ಒಂದು ಬಾಗಿಲು ತೆರೆದಿರುತ್ತದೆ ಎಂಬುದರಲ್ಲಿ ನಂಬಿಕೆ ಇಡಬೇಕು  ಎಂದು ಉಡುಪಿಯ ಡಾ.ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆಯ ಮನೋವೈದ್ಯರಾದ ಡಾ.ಪಿ.ವಿ.ಭಂಡಾರಿ ಕರೆ ನೀಡಿದರು. ಅವರು ಜೂನ್ 6ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಮಹಿಳಾ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಈ ವಯಸ್ಸಿನಲ್ಲಿ ಆತ್ಮವಿಶ್ವಾಸದ ಕೊರತೆ, ಕೀಳರಿಮೆ, ನಕಾರಾತ್ಮಕ ನೆಲೆಯ ಮೌಲ್ಯಮಾಪನ, ಸಾಮಾಜಿಕ ಆತಂಕ ಇವೆಲ್ಲ ಸಮಸ್ಯೆಗಳು ಕಾಡುತ್ತವೆ. ಅದರಿಂದ ಹೊರಬರಲು ತುಂಬಾ ಪ್ರಯಾಸ ಪಡಬೇಕಾಗುತ್ತದೆ. ಆದರೆ ನಿಮ್ಮ ಬದುಕು ಚೆನ್ನಾಗಿ ಇರಬೇಕಾದರೆ ಈ ಸಮಸ್ಯೆ ಗಳಿಂದ ಹೊರಗೆ ಬರಲೇಬೇಕು. ಹೊರಗೆ ಬರಲು ದಾರಿಗಳು ಸಹ ನಮ್ಮೊಳಗೆ ಅಡಗಿರುತ್ತದೆ. ನಿಮ್ಮ ಸಮಸ್ಯೆಗಳ ಕುರಿತು ಸ್ನೇಹಿತರು, ಗುರುಗಳು ಅಥವಾ ಯಾರಾದರೂ ಆತ್ಮೀಯರಲ್ಲಿ ಹಂಚಿಕೊಳ್ಳಿ. ಅಲ್ಲದಿದ್ದರೆ ಮನೋವೈದ್ಯರ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಿ, ಎಲ್ಲವುಗಳಿಗಿಂತ ಆತ್ಮ ಜಾಗೃತಿ, ಸಕಾರಾತ್ಮಕ ನೆಲೆಯಲ್ಲಿ ಬದುಕಿನ ಸ್ವೀಕಾರ, ಸಮಸ್ಯೆ ಬಗ್ಗೆ ಪರಿಹಾರ ಹುಡುಕಬೇಕು. ಹಾಗೆ ನಮ್ಮ ಭವಿಷ್ಯದ ನ